ಬೆಂಗಳೂರು: ವಿಕಲಚೇತನರ ವಾಹನಗಳಿಗೆ ರಸ್ತೆ ತೆರಿಗೆ ವಿನಾಯಿತಿ ನೀಡುವಂತೆ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ. ಈಕುರಿತು ಕಾರ್ಯಾಧ್ಯಕ್ಷ ಚಂದ್ರಶೇಖರ್ ಪುಟ್ಟಪ್ಪ ಮಾಡಿದ ಮನವಿಗೆ ಸ್ಪಂದಿಸಿದ ಸರ್ಕಾರ ಈ ಆದೇಶ ಹೊರಡಿಸಿದೆ. ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿ ವಾಹನವನ್ನು ಅಂಗವಿಕಲರು ಚಲಾಯಿಸುವಂತೆ ಮಾರ್ಪಾಡು ಮಾಡಿರಬೇಕು. ಇಲ್ಲವೆ ಮಾರ್ಪಾಡು ಮಾಡದೆಯೇ ಅಂಗವಿಕಲರು ವಾಹನ ಚಲಾಯಿಸಿದರೂ ಇಲ್ಲವೇ ಅವರೊಂದಿಗೆ ಇರುವವರು ಚಲಾಯಿಸಿದರೂ ರಿಯಾಯಿತಿಯೊಂದಿಗೆ ನಿಯಮಾನುಸಾರ ವಾಹನ ನೊಂದಣಿ ಮಾಡಿಕೊಡಬೇಕು ಎಂದು ಹೇಳಿತು. ಆದರೂ ರಾಜ್ಯದಲ್ಲಿ ಆರ್ಟಿಓ ಅಧಿಕಾರಿಗಳು ತೀವ್ರ ತರಹದ ಅಂಗವಿಕಲತೆಯಿAದ ಬಳಲುವ ಅಂಗವಿಕಲರು ವಾಹನ ಚಲಾಯಿಸಲಾಗದ ಕಾರಣ ವಾಹನ ಮಾರ್ಪಾಡಿನೊಂದಿಗೆ ಚಾಲಕನನ್ನು ನೇಮಿಸಿಕೊಂಡರೆ ಅಂತಹ ವಾಹನಗಳಿಗೆ ರಿಯಾಯಿಯಲ್ಲಿ ನೊಂದಣಿ ಮಾಡಲು ನಿರಾಕರಿಸುತ್ತಿದ್ದಾರೆ ಎಂದು ಚಂದ್ರಶೇಖರ್ ಪುಟ್ಟಪ್ಪ ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಸಾರಿಗೆ ಇಲಾಖೆ, ಅಂಗವಿಕಲ ಹಿದೃಷ್ಟಿಯಿಂದ ವಾಹನವನ್ನು ಮಾರ್ಪಾಡು ಮಾಡದೆ ಚಾಲಕರನ್ನು ನೇಮಿಸಿಕೊಂಡು ವಾಹನ ಬಳಸುವ ಅಂಗವಿಕಲರ ನೊಂದಣಿ ನಿರಾಕರಿಸದೆ ಜೀವಿತಾವಧಿ ರಸ್ತೆ ತೆರಿಗೆ ರಿಯಾಯಿತಿಯೊಂದಿಗೆ ನೊಂದಣಿ ಮಾಡಿ ಕೊಡಬೇಕು ಎಂದು ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದೆ.
You May Also Like
‘ಭಾರತೀಯ ಆಹಾರ ನಿಗಮ’ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ, ₹ 60,000 ವೇತನ , ಇಲ್ಲಿದೆ ಡಿಟೈಲ್ಸ್
ನಾರಾಯಣಸ್ವಾಮಿ. ಎನ್
Comments Off on ‘ಭಾರತೀಯ ಆಹಾರ ನಿಗಮ’ದಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ, ₹ 60,000 ವೇತನ , ಇಲ್ಲಿದೆ ಡಿಟೈಲ್ಸ್
ಕಾಡಂಚಿನ, ಖಾಸಗಿ ಜಾಗದಲ್ಲಿರುವ ಜನರಿಗೂ ಹಕ್ಕುಪತ್ರ ವಿತರಣೆ : ಸಿಎಂ ಬೊಮ್ಮಾಯಿ ಘೋಷಣೆ
ನಾರಾಯಣಸ್ವಾಮಿ. ಎನ್
Comments Off on ಕಾಡಂಚಿನ, ಖಾಸಗಿ ಜಾಗದಲ್ಲಿರುವ ಜನರಿಗೂ ಹಕ್ಕುಪತ್ರ ವಿತರಣೆ : ಸಿಎಂ ಬೊಮ್ಮಾಯಿ ಘೋಷಣೆ
ರಾಜ್ಯದ ನೂತನ 9 ವಿಶ್ವವಿದ್ಯಾಲಯಗಳಿಗೆ `ಕುಲಸಚಿವ’ರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ
ನಾರಾಯಣಸ್ವಾಮಿ. ಎನ್
Comments Off on ರಾಜ್ಯದ ನೂತನ 9 ವಿಶ್ವವಿದ್ಯಾಲಯಗಳಿಗೆ `ಕುಲಸಚಿವ’ರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ