ಪಾವಗಡ ಹಾಗೂ ಸುತ್ತಮುತ್ತಲಿನ ರೈತ ಬಾಂಧವರಿಗೆ ಹಾಗೂ ಗೋಪಾಲಕರಿಗೆ ತಿಳಿಸುವುದೇನೆಂದರೆ ಇದೇ ತಿಂಗಳು ತಾ.15-3-2023ನೇ ಬುಧವಾರ ಎಂದಿನಂತೆ ಮೇವು ವಿತರಣಾ ಕೇಂದ್ರವನ್ನು ತೆರೆಯಲಾಗುತ್ತದೆ. ರೈತ ಬಾಂಧವರು ಹಾಗೂ ಗೋಪಾಲಕರು ಈ ಕೂಡಲೇ ತಮ್ಮ ನಿಖರ ಹಾಗೂ ಖಚಿತವಾದ ದನ ಕರುಗಳ, ಎಮ್ಮೆಗಳ ಸಂಖ್ಯೆಯನ್ನು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದ ಕಛೇರಿಯಲ್ಲಿ ಪ್ರತಿದಿನ ಬೆಳಿಗ್ಗೆ 10 ರಿಂದ 12 ಗಂಟೆಯೊಳಗಾಗಿ ನೊಂದಾಯಿಸಬಹುದು. ಈ ಒಂದು ಮಾಹಿತಿಯನ್ನು ಸಂಬಂಧಪಟ್ಟ ಎಲ್ಲ ರೈತ ಬಾಂಧವರಿಗೆ ಹಾಗೂ ಗೋಪಾಲಕರಿಗೆ ತಿಳಿಸಬಹುದು. ಆದಷ್ಟು ಶೀಘ್ರವಾಗಿ ಈ ಮಾಹಿತಿಗಳನ್ನು ನೀಡಿದರೆ ಮೇವು ವಿತರಣಾ ಕಾರ್ಯ ಯೋಜನೆಗೆ ಅನುಕೂಲಕರವಾಗುತ್ತದೆ ಎಂದು ಆಶ್ರಮದ ಪ್ರಕಟಣೆ ತಿಳಿಸಿದೆ.
You May Also Like
ಇಂದು ಸುಪ್ರಸಿದ್ಧ ಜ್ಯೋತಿಷ್ಯಕಾರರು ಹಾಗೂ ದೃಶ್ಯ ಮಾಧ್ಯಮದಲ್ಲಿ ಪ್ರಸಿದ್ಧರೂ ಆಗಿರುವ ಜ್ಯೋತಿಷ್ಯ ರತ್ನ ಡಾ.ಬಸವರಾಜ ಗುರೂಜಿ ರವರ ಆಗಮನ
ನಾರಾಯಣಸ್ವಾಮಿ. ಎನ್
Comments Off on ಇಂದು ಸುಪ್ರಸಿದ್ಧ ಜ್ಯೋತಿಷ್ಯಕಾರರು ಹಾಗೂ ದೃಶ್ಯ ಮಾಧ್ಯಮದಲ್ಲಿ ಪ್ರಸಿದ್ಧರೂ ಆಗಿರುವ ಜ್ಯೋತಿಷ್ಯ ರತ್ನ ಡಾ.ಬಸವರಾಜ ಗುರೂಜಿ ರವರ ಆಗಮನ