
ಒಡೆದ ಹಾಲಿನ ಬಗ್ಗೆ ಬೆಂಗಳೂರಿಗರಿಂದ ದೂರಿನ ಸುರಿಮಳೆ; ಬೇಸಿಗೆ ನೆಪ ಹೇಳಿದ ಕೆಎಂಎಪ್
ಹೈನುಗಾರಿಕೆಯಲ್ಲಿ ಆಸಕ್ತಿ ಕಳೆದುಕೊಂಡ ರೈತರು
ಇನ್ನು ಮತ್ತೊಂದೆಡೆ ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (ಬಮುಲ್), ನಷ್ಟವನ್ನು ಉಲ್ಲೇಖಿಸಿ ರೈತರು ಹೈನುಗಾರಿಕೆಯನ್ನು ತ್ಯಜಿಸುವ ಪ್ರವೃತ್ತಿ ಹೆಚ್ಚುತ್ತಿರುವ ಕಾರಣ ಹಾಲಿನ ಕೊರತೆ ಎದುರಾಗಿದೆ. ಬಮುಲ್ ಅಂದಾಜಿನ ಪ್ರಕಾರ ಬೆಂಗಳೂರು ಪ್ರದೇಶವೊಂದರಿಂದಲೇ ಸುಮಾರು 2,500-3,000 ಜಾನುವಾರುಗಳನ್ನು ಪ್ರತಿ ತಿಂಗಳು ಹೈನುಗಾರಿಕೆ ಲಾಭದಾಯಕವಾಗಿರುವ ಇತರ ರಾಜ್ಯಗಳ ರೈತರಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಖಾಸಗಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ಪರಿಸ್ಥಿತಿ ಆತಂಕಕಾರಿಯಾಗಿದ್ದು, ರೈತರನ್ನು ಮನವೊಲಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಪ್ರತಿ ಲೀಟರ್ ಹಾಲಿಗೆ ನೆರೆಯ ರಾಜ್ಯಗಳು ರೈತರಿಗೆ 40 ರೂ.ಗಳನ್ನು ನೀಡುತ್ತಿದ್ದರೆ, ಕರ್ನಾಟಕವು 30 ರೂ.ಗಳನ್ನು ಪಾವತಿಸುತ್ತಿದೆ, ಇದು ವೆಚ್ಚವನ್ನು ಭರಿಸುವುದಿಲ್ಲ. ಪ್ರತಿ ತಿಂಗಳು 15-20 ರೈತರು ನಮಗೆ ಹಾಲು ಮಾರಾಟ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ ಎಂದರು.
ಬೆಂಗಳೂರಿನಲ್ಲಿ 20,500 ಅಕ್ರಮ ವ್ಯಾಪಾರ ಪತ್ತೆ; 16,449 ಜನರಿಗೆ ನೋಟಿಸ್, 132 ಮಳಿಗೆ ಬಂದ್ ಮಾಡಿಸಿದ ಬಿಬಿಎಂಪಿ
ಇದರ ಪರಿಣಾಮವಾಗಿ, ಬಮುಲ್ ಹಾಲಿನ ಪ್ಯಾಕೆಟ್ಗಳು, ತುಪ್ಪ ಮತ್ತು ಇತರ ಉತ್ಪನ್ನಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ. 15 ಲಕ್ಷ ಲೀಟರ್ ಹಾಲಿನಲ್ಲಿ ಬೆಂಗಳೂರಿನಾದ್ಯಂತ ಸುಮಾರು 11 ಲಕ್ಷ ಲೀಟರ್ ಹಾಲನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ.
ಉಳಿದರಲ್ಲಿ ಕೆನೆರಹಿತ ಹಾಲಿನ ಪುಡಿ ಮತ್ತು ಚೀಸ್ ತಯಾರಿಸಲು ಬಳಸಲಾಗುತ್ತಿದೆ. ಹಾಲಿನ ಪುಡಿಯನ್ನು ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದ ಯೋಜನೆಯಡಿ ಸರಬರಾಜು ಮಾಡಬೇಕು. ಸಹಾಯ ಕೋರಿ ಬಮೂಲ್ನ ಅನೇಕ ಮನವಿಗಳಿಗೆ ಸರ್ಕಾರ ಸ್ಪಂದಿಸದ ಕಾರಣ, ಇದೇ ಪರಿಸ್ಥಿತಿ ಒಂದು ತಿಂಗಳು ಮುಂದುವರಿದರೆ ಬಿಕ್ಕಟ್ಟು ಉಂಟಾಗುತ್ತದೆ ಎಂದು ಅವರು ತಿಳಿಸಿದರು.