
ತುಮಕೂರು ನಗರದಲ್ಲಿ 2025ರ ಜನವರಿ 18 ರ ಶನಿವಾರ ಮತ್ತು 19 ರ ಭಾನುವಾರ ನಡೆಯುವ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 39ನೇ ರಾಜ್ಯ ಸಮ್ಮೇಳನ-2025ದ ಅಂಗವಾಗಿ ಪತ್ರಕರ್ತರ ರಾಜ್ಯ ಸಂಘದ ಅಧ್ಯಕ್ಷ ಶಿವಾನಂದ ತಡಗೂರು ಸಮ್ಮೇಳನದ ಇ – ನೊಂದಣಿಯ ಗೂಗಲ್ ಅಫ್ ಬಿಡುಗಡೆ ಮಾಡಿದರು.
ತುಮಕೂರು ನಗರದ ಪತ್ರಿಕಾ ಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗೂಗಲ್ ಅಫ್ ಬಿಡುಗಡೆ ಮಾಡಿ ವೇಳೆ ಮಾತನಾಡಿದ ಅವರು,ಗೂಗಲ್ ಅಫ್ನಿಂದಾಗಿ ಸಮ್ಮೇಳನದ ನೊಂದಣಿ ಕೆಲಸ ಬಹಳ ಸುಲಭವಾಗಿದ್ದು, ಆಸಕ್ತರು, kuwjtumkur2024@gmail.com ನ ಮೂಲಕ ಸಮ್ಮೇಳನದ ಪ್ರತಿನಿಧಿಯಾಗಿ ತಮ್ಮ ಹೆಸರು ನೊಂದಾಯಿಸಿಕೊಳ್ಳಬಹುದು. ಗೂಗಪ್ ಫಾರಂ ನಲ್ಲಿ ಬರುವ ಅರ್ಜಿಯನ್ನು ತುಂಬುವ ಮೂಲಕ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶವಿದೆ.ಗೂಗಲ್ ಅಫ್ ನಲ್ಲಿ ಹೆಸರು ನೊಂದಾಯಿಸುವುದರಿಂದ ಸಮ್ಮೇಳನದ ಸಂದರ್ಭದಲ್ಲಿ ವಸತಿ ಪಡೆಯಲು ಅನುಕೂಲವಾಗುತ್ತದೆ ಜನವರಿ 10ನೇ ತಾರೀಕು ನೊಂದಾಯಿಸಿಕೊಳ್ಳಲು ಕೊನೆ ದಿನವಾಗಿದೆ ನಂತರ ನೊಂದಣಿ ಮಾಡಿದ್ದಾರೆ ಅದನ್ನ ಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದರು.

ಕಲ್ಪತರು ನಾಡಿನಲ್ಲಿ ನಡೆಯುವ ಎರಡು ದಿನಗಳ ಸಮ್ಮೇಳನದ ಬಗ್ಗೆ ರಾಜ್ಯದ ಪತ್ರಕರ್ತರಿಗೆ ಬಹಳ ನಿರೀಕ್ಷೆಗಳಿವೆ. ಈಗಾಗಲೇ 2024ರ ನವೆಂಬರ್ನಲ್ಲಿ ನಡೆದ ಪತ್ರಕರ್ತರ ರಾಜ್ಯ ಕ್ರೀಡಾಕೂಟವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಟ್ಟ ಹಿನ್ನೆಲೆಯಲ್ಲಿ, ರಾಜ್ಯ ಸಮ್ಮೇಳನದ ಬಗ್ಗೆ ಹೆಚ್ಚಿನ ನಿರೀಕ್ಷೆಗಳಿವೆ.ಹಾಗಾಗಿ ರಾಜ್ಯ ಪದಾಧಿಕಾರಿಗಳ ಜೊತೆಗೆ, ಜಿಲ್ಲಾ ಪದಾಧಿಕಾರಿಗಳು ಸಹ ಶಕ್ತಿ ಮೀರಿ ಕೆಲಸ ಮಾಡಬೇಕಾಗಿದೆ.ಊಟ,ವಸತಿ ಜೊತೆಗೆ ಅತಿಥ್ಯ ಚನ್ನಾಗಿರಬೇಕು. ಈಗಾಗಲೇ ಒಂದು ಹಂತದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.ಸಮ್ಮೇಳನಕ್ಕೆ ಕೆಲವೇ ದಿನಗಳು ಬಾಕಿ ಇರುವ ಕಾರಣ ಸಮರೋಪಾದಿ ಯಲ್ಲಿ ಕೆಲಸ ಮಾಡುವಂತೆ ಶಿವಾನಂದ ತಗಡೂರು ಮನವಿ ಮಾಡಿದರು.
ಇದುವರೆಗೂ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಆಗಿರುವ ಸಿದ್ದತೆಗಳ ಬಗ್ಗೆ ಕೆ.ಯು. ಡಬ್ಲ್ಯು. ಜೆ. ತುಮಕೂರು ಜಿಲ್ಲಾಧ್ಯಕ್ಷ ಚಿ.ನಿ.ಪುರುಷೋತ್ತಮ್, ಸ್ಮರಣ ಸಂಚಿಕೆಗೆ ಜಾಹೀರಾತುಗಳ ಕುರಿತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಇ.ರಘುರಾಮ್,ಊಟೋಪಚಾರದ ಕುರಿತು ರಾಷ್ಟ್ರೀಯ ಮಂಡಳಿ ಸದಸ್ಯ ಟಿ.ಎನ್.ಮಧುಕರ್,ವಸತಿ ಕುರಿತು ಸತೀಶ್ ಹಾರೋಗೆರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಹೆಚ್.ಎಸ್.ಪರಮೇಶ್,ನೊಂದಣಿ ಕುರಿತು ಸಿದ್ದಲಿಂಗಸ್ವಾಮಿ ಅವರುಗಳು ಮಾತನಾಡಿದರು. ಈ ಸಭೆಯಲ್ಲಿ ರಾಷ್ಟ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಡಿ.ಎಂ. ಸತೀಶ್, ಸದಸ್ಯರಾದ ಶಾಂತರಾಜು, ಜಿಲ್ಲಾ ಸಂಘದ ಉಪಾಧ್ಯಕ್ಷರಾದ ಪ್ರಸನ್ನ ಮೂರ್ತಿ, ವಿ.ಚಿಕ್ಕಿರಪ್ಪ , ತಿಪಟೂರು ಕೃಷ್ಣ , ಜಿಲ್ಲಾ ಕಾರ್ಯದರ್ಶಿ ರಂಗಧಾಮಯ್ಯ, ಹರೀಶ ಆಚಾರ್ಯ , ಜಿಲ್ಲಾ ಸಂಘದ ನಿರ್ದೇಶಕರುಗಳು ಹಾಗೂ ವಿವಿಧ ಉಪ ಸಮಿತಿಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.